ಅಕ್ಟೋಬರ್ 14ರಂದು ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಚಾಲನೆ ಗೊಂಡ ದ್ವಿಭಾಷಾ ಚಿತ್ರ ‘ನಿನ್ನಲ್ಲೇ ನಾನು’ ಕನ್ನಡದಲ್ಲಿ ಹಾಗೂ ‘ನಕೋ ವಸ್ತಾವ’ ತೆಲುಗು ಚಿತ್ರಗಳ ಚಿತ್ರೀಕರಣ ಬಿರುಸಿನಿಂದ 10 ದಿವಸಗಳು ಬೆಂಗಳೂರಿನಲ್ಲಿ ನಡೆದಿ ಇದೀಗ ಚಿತ್ರತಂಡ ವಾಯಿಜಾಗ್ ಕಡೆ ಪ್ರಯಾಣ ಬೆಳಸಿದೆ.
ಅಜಯ್ ಸೂರಿಯ ಹಾಗೂ ಮಣಿಕುಮಾರ್ ಎರಡು ಭಾಷೆಗಳ ನಿರ್ಮಾಪಕರ ಕಲಾವಿದರ ತಂಡಕ್ಕೆ ಕನ್ನಡದ ನೇಹ ಪಾಟೀಲ್ ಆಗಮನವಾಗಿದೆ. ರವಿ ರಾಜ್ಹ್ ಅವರ ನಿರ್ದೇಶನದ ಚಿತ್ರಕ್ಕೆ ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣ, ಚಕ್ರಿ ಅವರು ತಮ್ಮ 100ನೇ ಚಿತ್ರಕ್ಕೆ ಎರಡು ಭಾಷೆಗಳ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಜೆ.ಕೆ. ಅವರ ಚಿತ್ರಕಥೆ ಕುತೂಹಲಕಾರಿಯಾಗಿ ಸಿದ್ದಗೊಂಡಿದೆ.
ತೆಲುಗು ಭಾಷೆಯಲ್ಲಿ ಖ್ಯಾತಿ ಪಡೆದಿರುವ ಯುವ ಮನಸುಗಳ ಸರದಾರ ವರುಣ್ ಸಂದೇಶ್ ದ್ವಿಭಾಷಾ ಚಿತ್ರದ ನಾಯಕ. ಬಾರ್ಬಿ ತಲಾ ಒಂದೊಂದು ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಅಭಿನಯಿಸಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಹಿಂದಿ ಸಿನೆಮಾ ಅಭಿನೇತ್ರಿ ಪ್ರಿಯಾಂಕ ಚೋಪ್ರ ಅವರ ಹತ್ತಿರ ಸಂಬಂದಿ ಈ ಚಿತ್ರಕ್ಕೆ ನಾಯಕಿ. ಮಹೇಶ್ ಗಾಂಧಿ, ಅರುಣ್ ದೇವಸ್ಯ ಹಾಗೂ ಇತರರು ತೆಲುಗು ಹಾಗೂ ಕನ್ನಡ ಸಿನೆಮಗಳ್ಳಿ ಜನಪ್ರಿಯತೆ ಪಡೆದವರು ಪಾತ್ರವರ್ಗದಲ್ಲಿ ಇದ್ದಾರೆ.
ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.